Saturday, May 30, 2026
HomeCrimeಜಂಗುಳಿಯಲ್ಲಿ ಕಳ್ಳರ ಕೈಚಳಕ; ₹3.52 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಜಂಗುಳಿಯಲ್ಲಿ ಕಳ್ಳರ ಕೈಚಳಕ; ₹3.52 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಶಿರಸಿ: ಬಸ್ ನಿಲ್ದಾಣದ ಜನಸಂದಣಿಯ ನಡುವೆ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ 3.52 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊನ್ನಾವರ ತಾಲೂಕಿನ ಇಡಗುಂಜಿ ಬಳಕೂರಿನ ಹಾಮಾಕ್ಕಿ ನಿವಾಸಿ ಮಾದೇವಿ ರಾಮಚಂದ್ರ ನಾಯಕ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಮೇ 19, 2026ರಂದು ಮಧ್ಯಾಹ್ನ ಸುಮಾರು 2:15 ಗಂಟೆಗೆ ಚಂದ್ರಗುತ್ತಿ-ಹರಿಶಿ ಬಸ್ ಬಂದ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಭಾರೀ ಜನಸಂದಣಿ ಉಂಟಾಗಿತ್ತು.

ಈ ವೇಳೆ ಮಾದೇವಿ, ಅವರ ಮಗ ದಿಗಂತ್, ಅತ್ತೆ ಪಾರ್ವತಿ ಹಾಗೂ ಸಂಬಂಧಿಕರು ಬಸ್ ಹತ್ತುತ್ತಿದ್ದಾಗ, ಅವರು ಹೊತ್ತೊಯ್ಯುತ್ತಿದ್ದ ವೆನಿಟಿ ಬ್ಯಾಗ್‌ನ ಜಿಪ್ ಅನ್ನು ಯಾರೋ ಕಳ್ಳರು ತೆರೆದಿದ್ದರು.ಅಷ್ಟೇ ಅಲ್ಲದೆ, ಬ್ಯಾಗ್‌ನೊಳಗಿನ ಬಾಕ್ಸ್‌ನಲ್ಲಿ ಇರಿಸಿದ್ದ ಅಂದಾಜು 18 ಗ್ರಾಂ ತೂಕದ ಚಿನ್ನದ ಶಾರ್ಟ್ ನೆಕ್ಲೇಸ್, 30 ಗ್ರಾಂ ತೂಕದ ಉದ್ದ ಹಾರ, 2 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ 10 ಗ್ರಾಂ ಬೆಳ್ಳಿ ನಾಣ್ಯ ಸೇರಿದಂತೆ ಒಟ್ಟು ₹3,52,000 ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು Sirsi Town Police Stationನಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share