ಬೆಂಗಳೂರು: ನಾಳೆ, ಫೆಬ್ರವರಿ 16ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬಸ್ಗಳಲ್ಲಿ ಪ್ರಯಾಣಿಕರಿಲ್ಲದೆ ಸಾಗಿಸುವ ಲಗೇಜ್ ಮೇಲೆ ಹೊಸ ಪರಿಷ್ಕೃತ ದರ ಜಾರಿಯಾಗಲಿದೆ.
ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಮಾಹಿತಿ ನೀಡಿದ್ದಾರೆ.
ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೆಚ್ಚ ಹಾಗೂ ಇತರೆ ಆಡಳಿತ ಖರ್ಚುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಗೇಜ್ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿದೆ. 2021ರಲ್ಲಿ ಲಗೇಜ್ ದರ ಏರಿಕೆಯಾಗಿದ್ದರೂ, ನಂತರ ಟಿಕೆಟ್ ದರ ಪರಿಷ್ಕರಣೆ ವೇಳೆ ಲಗೇಜ್ ಶುಲ್ಕ ಹೆಚ್ಚಳ ಮಾಡಲಾಗಿರಲಿಲ್ಲ ಎಂಬುದನ್ನು ನಿಗಮ ಸ್ಪಷ್ಟಪಡಿಸಿದೆ.
ಈಗಾಗಲೇ ನಿಗಮವು ಹೊಸ ಲಗೇಜ್ ದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ 1ರಿಂದ 5 ಸ್ಟೇಜ್ವರೆಗೆ 6 ರೂ, 6ರಿಂದ 12 ಸ್ಟೇಜ್ವರೆಗೆ 12 ರೂ,
156ರಿಂದ 160 ಸ್ಟೇಜ್ವರೆಗೆ 145 ರೂ ಶುಲ್ಕ ನಿಗದಿಪಡಿಸಲಾಗಿದೆ.
ನೂತನ ದರ ಜಾರಿಯಾದ ಬಳಿಕ ಪ್ರಯಾಣಿಕರಿಲ್ಲದೆ ಸರಕು ಸಾಗಿಸುವವರು ಪರಿಷ್ಕೃತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.