Thursday, July 23, 2026
Join WhatsApp Group
HomeLocal Newsಯಲ್ಲಾಪುರ ಬಿಜೆಪಿಗೆ ಮುಂದಿನ ನೇತಾರ ಯಾರು?

ಯಲ್ಲಾಪುರ ಬಿಜೆಪಿಗೆ ಮುಂದಿನ ನೇತಾರ ಯಾರು?

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ.
ಕೆನರಾ ನೆಕ್ಸ್ಟ್‌ ಓದುಗರ ತೀರ್ಪು ಅರಿಯೋಣ!

ಯಲ್ಲಾಪುರ: ಕರ್ನಾಟಕದಲ್ಲಿ ಮುಂಬರುವ ದಿನಗಳಲ್ಲಿ ಸಾಲು ಸಾಲು ಚುನಾವಣೆಗಳು ಎದುರಾಗಲಿರುವ ಹಿನ್ನೆಲೆ, ರಾಜಕೀಯ ಪಕ್ಷಗಳ ಒಳಾಂಗಣ ಚಟುವಟಿಕೆಗಳು ಚುರುಕುಗೊಂಡಿವೆ. ಅದರಲ್ಲೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುಂದಿನ ನಾಯಕತ್ವದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಪ್ರಶ್ನೆ ಇದೀಗ ತಾಲೂಕಷ್ಟೇ ಅಲ್ಲದೆ ಜಿಲ್ಲೆಯಾದ್ಯಂತ ಕಾರ್ಯಕರ್ತರು, ಮುಖಂಡರು ಮತ್ತು ಸಾರ್ವಜನಿಕರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಕ್ಷೇತ್ರದ ರಾಜಕೀಯ ಸಮೀಕರಣಗಳು ಸಾಕಷ್ಟು ಬದಲಾಗಿವೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುಖಂಡ ಶಿವರಾಮ ಹೆಬ್ಬಾರ, ಬಳಿಕ ನಡೆದ ಉಪಚುನಾವಣೆ, ಶಾಸಕ ಶಿವರಾಮ ಹೆಬ್ಬಾರ್ ಅವರ ಗೆಲುವು, ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅವರ ವಿಜಯ ಈ ಎಲ್ಲ ಬೆಳವಣಿಗೆಗಳು ಕ್ಷೇತ್ರದ ಬಿಜೆಪಿ ಸಂಘಟನೆಯ ಸ್ವರೂಪವನ್ನೇ ಬದಲಿಸಿವೆ. ಆದರೆ ಸ್ವಪಕ್ಷೀಯರ ಒಳಹುನ್ನಾರ ಮತ್ತು ಅಸಮಾಧಾನದ ಕಾರಣದಿಂದ ಬಿಜೆಪಿಯಲ್ಲಿ ಸಂಘಟನಾ ನಾಯಕತ್ವದ ಗಟ್ಟಿತನ ಕುಂದಿದೆ ಎಂಬ ಮಾತು ಕೇಳಿಬರುತ್ತಿದೆ.

ಜನರಲ್ಲಿ ಭರವಸೆ ಮೂಡಿಸಿ, ಪಕ್ಷವನ್ನು ಚಾಕಚಕ್ಯತೆಯಿಂದ ಮುನ್ನಡೆಸಬಲ್ಲ ಮುಂದಿನ ನಾಯಕ ಬಿಜೆಪಿಯಲ್ಲಿ ಯಾರು ಎಂಬುದೇ ಮುಖ್ಯ ಪ್ರಶ್ನೆಯಾಗಿದೆ. ಪ್ರಸ್ತುತ ಮೂರು ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿವೆ.

ಹರಿಪ್ರಕಾಶ್ ಕೋಣೆಮನೆ – ಸಂಘದ ಹಿನ್ನೆಲೆ ಹೊಂದಿರುವ, ಮಾಧ್ಯಮ ಕ್ಷೇತ್ರದಲ್ಲಿ ಚಿರಪರಿಚಿತರಾದ, ಸದ್ಯ ಬಿಜೆಪಿ ರಾಜ್ಯ ವಕ್ತಾರರಾಗಿ ಸಕ್ರಿಯರಾಗಿರುವ ನಾಯಕ ಹರಿಪ್ರಕಾಶ ಕೋಣೆಮನೆ. ಹವ್ಯಕ ಸಮುದಾಯದ ಪ್ರಬಲ ಮತಬಲ, ಸಂಘ ಪರಿವಾರದ ಸಂಪರ್ಕ ಮತ್ತು ರಾಜಕೀಯ ಅರಿವು ಇವರ ಶಕ್ತಿಯೆನ್ನಬಹುದು.

ಶಿವಲಿಂಗಯ್ಯ ಎಸ್. ಅಲ್ಲಯ್ಯನವರಮಠ – ಸಂಘ ಪರಿವಾರದ ನಿಕಟ ಸಂಪರ್ಕ, ಮಾಜಿ ಸಂಸದ Anant Kumar Hegde ಅವರ ಆಪ್ತತೆ, ವೀರಶೈವ-ಲಿಂಗಾಯತ ಸಮುದಾಯದ ಬೆಂಬಲ, ರಂಭಾಪುರಿ ಪೀಠದ ಆಶೀರ್ವಾದ ಮತ್ತು ರಾಜ್ಯ-ರಾಷ್ಟ್ರೀಯ ನಾಯಕರ ಸಂಪರ್ಕ ಇವರಿಗೆ ರಾಜಕೀಯವಾಗಿ ಪ್ಲಸ್ ಆಗಿದೆ.

ಬಾಲಕೃಷ್ಣ ನಾಯಕ್ – ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಉದಯೋನ್ಮುಖ ಉದ್ಯಮಿ, ಸಮಾಜಸೇವಕ, ದಾನಿ. ಆರ್ಥಿಕವಾಗಿ ಸಬಲ ನಾಯಕತ್ವ, ಜನಸಂಪರ್ಕ, ಸಂಘಟನಾ ಸಾಮರ್ಥ್ಯ ಹಾಗೂ ಗೋವಾದ ಪ್ರಮುಖರಾದ Pramod Sawant ಅವರೊಂದಿಗಿನ ಉತ್ತಮ ಬಾಂಧವ್ಯ ಇವರ ಬಲವಾಗಿದೆ.

ಆದರೆ ರಾಜಕೀಯ ತನ್ನ ಬಣ್ಣವನ್ನು ಯಾವ ಕ್ಷಣದಲ್ಲಾದರೂ ಬದಲಿಸಬಹುದು. ಪ್ರಸ್ತುತ ಯಲ್ಲಾಪುರದಲ್ಲಿ ಬಿಜೆಪಿ ಅಧ್ಯಕ್ಷರಾಗಿರುವ ಪ್ರಸಾದ ಹೆಗಡೆ ಅವರ ಹೆಸರೂ ಕೇಳಿಬರುತ್ತಿದ್ದು, ಮುಂಡಗೋಡು ಅಥವಾ ಬನವಾಸಿ ಭಾಗಗಳಿಂದಲೂ ಹೊಸ ಹೆಸರುಗಳು ಹೊರಬರುವ ಸಾಧ್ಯತೆ ಇದೆ. ಅಂತಿಮವಾಗಿ ಪಕ್ಷದ ಅಧಿಕೃತ ನಿರ್ಧಾರವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

ಯಲ್ಲಾಪುರ ಮತಕ್ಷೇತ್ರದ ಬಿಜೆಪಿಯ ಮುಂದಿನ ನಾಯಕ ಯಾರು?

🔘 ಹರಿಪ್ರಕಾಶ್ ಕೋಣೆಮನೆ
🔘 ಶಿವಲಿಂಗಯ್ಯ ಎಸ್. ಅಲ್ಲಯ್ಯನವರಮಠ
🔘 ಬಾಲಕೃಷ್ಣ ನಾಯಕ್
🔘 ಮುಂಡಗೋಡು/ಬನವಾಸಿ ಭಾಗದ ಇನ್ನೋರ್ವ ನಾಯಕ
🔘 ಈಗಲೇ ಹೇಳಲು ಸಾಧ್ಯವಿಲ್ಲ

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ.
ಕೆನರಾ ನೆಕ್ಸ್ಟ್‌ ಓದುಗರ ತೀರ್ಪು ಅರಿಯೋಣ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

6 COMMENTS

  1. ಅನಂತ ಕುಮಾರ್ ಹೆಗಡೆ or ಹರಿಪ್ರಕಾಶ್ ಕೊಣೆಮನೆ

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share