ಮುಂಡಗೋಡ: ಜಾನುವಾರುಗಳನ್ನು ಕ್ರೂರವಾಗಿ ಹಾಗೂ ನಿಯಮ ಉಲ್ಲಂಘಿಸಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಆರೋಪದಡಿ ಮೂವರ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 10ರಂದು ಬೆಳಿಗ್ಗೆ 7.30ರ ಸುಮಾರಿಗೆ ಮಹೀಂದ್ರಾ ಸುಪ್ರೋ ವಾಹನದಲ್ಲಿ ಮೂರು ಜಾನುವಾರುಗಳನ್ನು ತುಂಬಿಕೊಂಡು ಸಾಗಾಟ ಮಾಡಲಾಗುತ್ತಿತ್ತು. ಜಾನುವಾರುಗಳಿಗೆ ನಿಲ್ಲಲು ಅಥವಾ ಮಲಗಲು ಅಗತ್ಯ ಸ್ಥಳಾವಕಾಶ ಕಲ್ಪಿಸದೆ, ಮೇವು ಹಾಗೂ ನೀರಿನ ವ್ಯವಸ್ಥೆಯೂ ಇಲ್ಲದೆ ಅವುಗಳನ್ನು ಒಂದಕ್ಕೊಂದು ಒತ್ತಿಕೊಂಡ ಸ್ಥಿತಿಯಲ್ಲಿ ಸಾಗಿಸಲಾಗುತ್ತಿತ್ತು.
ವಾಹನದಲ್ಲಿ ಒಂದು ಕೆಂಪು ಬಣ್ಣದ ಹೊರಿ ಕರು, ಒಂದು ಬಿಳಿ ಬಣ್ಣದ ಹೊರಿ ಕರು ಹಾಗೂ ಒಂದು ಕೆಂಪು ಬಣ್ಣದ ಆಕಳು ಕರು ಸೇರಿದಂತೆ ಒಟ್ಟು ಮೂರು ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಇವುಗಳ ಒಟ್ಟು ಮೌಲ್ಯ ಸುಮಾರು ₹10 ಸಾವಿರ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕಕೌಂಶಿ ಹೊಸೂರಿನ ನಿವಾಸಿ ಇಮ್ಮುಸಾಬ್ ಕಲಂದರಸಾಬ್ ಬೆಫಾರಿ (34), ಮಂತಗಿ ಗ್ರಾಮದ ಹನಮಂತಪ್ಪ ಸಹದೇವಪ್ಪ ತೋಟದ (35) ಹಾಗೂ ನಾಗರಾಜ ಬಸಪ್ಪ ತೆಂಗಿನವರ (32) ವಿರುದ್ಧ ಪ್ರಕರಣ ದಾಖಲಾಗಿದೆ.