ಶಿರಸಿ: ನಗರದ ಬಿಡ್ಕಿ ಸರ್ಕಲ್ ಸಮೀಪ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.
ಸುಭಾಷನಗರ ನಿವಾಸಿ ವೆಂಕಟೇಶ್ ನಾರಾಯಣ ಬೋವಿವಡ್ಡರ್ (43) ಮೃತ ದುರ್ದೈವಿ. ಜೂನ್ 17ರಂದು ಮಧ್ಯಾಹ್ನ ಅವರು ಪರಮೇಶ್ವರ ಕನ್ನಾ ನಾಯ್ಕ ಅವರೊಂದಿಗೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದರು. ಕೇಂದ್ರ ಬಸ್ ನಿಲ್ದಾಣದಿಂದ ಒನ್ವೇ ರಸ್ತೆಯ ಮೂಲಕ ಬರುತ್ತಿದ್ದ ವೇಳೆ ಬಿಡ್ಕಿ ಸರ್ಕಲ್ ಬಳಿ ಟಾಕ್ಟರ್ಗೆ ಸ್ಕೂಟಿ ಡಿಕ್ಕಿ ಹೊಡೆದಿತ್ತು.
ಆರೆಕೊಪ್ಪದ ನಾಗರಾಜ ಮಾರುತಿ ನಾಯ್ಕ ಚಾಲನೆ ಮಾಡುತ್ತಿದ್ದ ಟಾಕ್ಟರ್ನ ಎಂಜಿನ್ ಹಾಗೂ ಟಯರ್ ನಡುವಿನ ಭಾಗಕ್ಕೆ ಸ್ಕೂಟಿ ಗುದ್ದಿದ ಪರಿಣಾಮ ಸವಾರ ಮತ್ತು ಸಹಸವಾರ ಇಬ್ಬರೂ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ವೆಂಕಟೇಶ್ ಬೋವಿವಡ್ಡರ್ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವೆಂಕಟೇಶ್ ಚಿಕಿತ್ಸೆಗೂ ಸ್ಪಂದಿಸದೆ ಜೂನ್ 18ರ ಸಂಜೆ ಕೊನೆಯುಸಿರೆಳೆದಿದ್ದಾರೆ.