ಯಲ್ಲಾಪುರ: ಭಾರತೀಯ ಕಾಲವಿಧಿ ಶಾಸ್ತ್ರ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಮೇ 21ರಿಂದ 24ರವರೆಗೆ ನಾಲ್ಕು ದಿನಗಳ ಉಚಿತ ಜ್ಯೋತಿಷ್ಯ ಕಲಿಕಾ ಶಿಬಿರ ಆಯೋಜಿಸಲಾಗಿದೆ.
ಯಲ್ಲಾಪುರದ ನಾಯ್ಕನಕೆರೆಯ ಶಾರದಾಂಬಾ ದೇವಸ್ಥಾನದ ಆವರಣದಲ್ಲಿ ಪ್ರತಿದಿನ ಸಂಜೆ 4ರಿಂದ 6.15ರವರೆಗೆ ಶಿಬಿರ ನಡೆಯಲಿದೆ. ವಿದ್ವಾನ್ ಸತೀಶ ಸುಬ್ರಾಯ ಭಟ್ಟ ಗುಂಡ್ಯಾನಕೊಪ್ಪ ಅವರು ಶಿಬಿರವನ್ನು ನಿರ್ವಹಿಸಲಿದ್ದಾರೆ.
ಶಿಬಿರದಲ್ಲಿ ಪಂಚಾಂಗ ಪಠಣ, ಜನನ ಸಮಯಕ್ಕೆ ಅನುಗುಣವಾಗಿ ಜಾತಕ ರಚನೆ, ಪಂಚಮಾರಿಷ್ಟ, ಬಾಲಾರಿಷ್ಟ ಹಾಗೂ ದಶಾಸಂಧಿ ನಿರ್ಣಯ ಕುರಿತು ತರಬೇತಿ ನೀಡಲಾಗುತ್ತದೆ. ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಆಧಾರ ಸಹಿತವಾಗಿ ವಿಮರ್ಶಾತ್ಮಕವಾಗಿ ವಿಷಯ ಬೋಧಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಎಲ್ಲಾ ವಯಸ್ಸಿನ ಸ್ತ್ರೀ-ಪುರುಷರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸಲು ಇಚ್ಛಿಸುವವರು ವಾಟ್ಸಪ್ ಮೂಲಕ 9741258892 ಸಂಖ್ಯೆಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಆನ್ಲೈನ್ ಪಾಠ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಲಾಗಿದೆ.