Friday, March 13, 2026
HomeLocal Newsಕನಕನಹಳ್ಳಿಯಲ್ಲಿ ಮಾ.14ರಂದು ಸಂಗೀತೋತ್ಸವ; ಡಾ. ಹರೀಶ ಹೆಗಡೆಗೆ ಸನ್ಮಾನ

ಕನಕನಹಳ್ಳಿಯಲ್ಲಿ ಮಾ.14ರಂದು ಸಂಗೀತೋತ್ಸವ; ಡಾ. ಹರೀಶ ಹೆಗಡೆಗೆ ಸನ್ಮಾನ

ಯಲ್ಲಾಪುರ: ಸಪ್ತಕ ಬೆಂಗಳೂರು ಹಾಗೂ ವಿಜಯ ವಿನಾಯಕ ಯುವಕ ಸಂಘ, ಕನಕನಹಳ್ಳಿ ಆಶ್ರಯದಲ್ಲಿ ಕನಕನಹಳ್ಳಿ ಸಂಗೀತೋತ್ಸವ ಕಾರ್ಯಕ್ರಮವನ್ನು ಮಾ. 14ರಂದು ಸಂಜೆ 4 ಗಂಟೆಗೆ ಕನಕನಹಳ್ಳಿಯ ಶ್ರೀ ಲಕ್ಷ್ಮೀನರಸಿಂಹ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ರಾಧಾ ದೇಸಾಯಿ ಮತ್ತು ಅನಿರುದ್ಧ ಐತಾಳ ಅವರುಗಳ ಗಾಯನ ನಡೆಯಲಿದೆ. ತಬಲಾದಲ್ಲಿ ಯೋಗೀಶ್‌ ಭಟ್ಟ ಹಾಗೂ ಗಣೇಶ ಭಾಗ್ವತ ಗುಂಡ್ಕಲ್, ಹಾರ್ಮೋನಿಯಂನಲ್ಲಿ ಸತೀಶ್‌ ಭಟ್ಟ ಹೆಗ್ಗಾರ ಸಾಥ್ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಸಪ್ತಕ ಸಂಸ್ಥೆಯ ವತಿಯಿಂದ ಪಂ. ಮಲ್ಲಿಕಾರ್ಜುನ ಮನ್ಸೂರ ಯುವ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಹರೀಶ ಹೆಗಡೆ ಅವರನ್ನು ಸನ್ಮಾನಿಸಲಾಗುವುದು ಎಂದು ಸಪ್ತಕ ಸಂಚಾಲಕ ಜಿ.ಎಸ್. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share