Saturday, May 30, 2026
HomeLocal Newsಶಿರಾಲಿ ದುರಂತ; ಶಾಸಕ ಹೆಬ್ಬಾರ್ ಸಂತಾಪ

ಶಿರಾಲಿ ದುರಂತ; ಶಾಸಕ ಹೆಬ್ಬಾರ್ ಸಂತಾಪ

ಯಲ್ಲಾಪುರ: ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಸಂಭವಿಸಿದ ಭೀಕರ ದುರಂತದ ಕುರಿತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದ ಒಂದೇ ಕುಟುಂಬದ 8 ಜನರು ನೀರಿನ ರಭಸಕ್ಕೆ ಸಿಲುಕಿ ಜೀವ ಕಳೆದುಕೊಂಡಿರುವುದು ನಿಜಕ್ಕೂ ನಂಬಲಾರದ ದುಃಖದ ಸಂಗತಿ. ಒಂದು ಮನೆಯ ಬೆಳಕೇ ಕ್ಷಣಾರ್ಧದಲ್ಲಿ ನಂದಿಹೋಗಿರುವ ಈ ದುರಂತವು ಇಡೀ ಸಮಾಜವನ್ನೇ ಮೌನಗೊಳಿಸಿದೆ.

ಮೃತರಾದ ಎಲ್ಲಾ ಆತ್ಮಗಳಿಗೆ ದೇವರು ಚಿರಶಾಂತಿ ನೀಡಲಿ. ದುಃಖ ಸಾಗರದಲ್ಲಿ ಮುಳುಗಿರುವ ಕುಟುಂಬಸ್ಥರಿಗೆ ಹಾಗೂ ಬಂಧು ಬಳಗಕ್ಕೆ ಈ ಅಸಹನೀಯ ನೋವನ್ನು ತಡೆದುಕೊಳ್ಳುವ ಧೈರ್ಯ ಮತ್ತು ಶಕ್ತಿ ದೊರಕಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

 ಕಾಣೆಯಾಗಿರುವವರು ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ಆಶಯ ವ್ಯಕ್ತಪಡಿಸಿರುವ ಅವರು, ಈ ದುಃಖದ ಕ್ಷಣದಲ್ಲಿ ನಾವೆಲ್ಲರೂ ಅವರ ಕುಟುಂಬದ ಜೊತೆಗಿದ್ದೇವೆ  ಎಂದು ಸಂತಾಪ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share