ಸಿದ್ಧಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾದಲ್ಲಿ ನಡೆದ ವಸಂತ್ ನಾಯ್ಕ್ ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಪಾಲಾಗಿರುವ ಖ್ಯಾತ ಜ್ಯೋತಿಷಿ ಎಂದೇ ಗುರುತಿಸಿಕೊಂಡಿದ್ದ ಕಮಲಾಕರ ಭಟ್ ಜೈಲಲ್ಲೂ ತಮ್ಮ ಜ್ಯೋತಿಷ್ಯ ಚಟುವಟಿಕೆ ನಿಲ್ಲಿಸಿಲ್ಲ ಎಂಬ ಮಾಹಿತಿ ಕೇಳಿಬಂದಿದೆ.
ಜೈಲಿನಲ್ಲಿರುವ ಕೈದಿಗಳಿಗೆ ಹಾಗೂ ಸಿಬ್ಬಂದಿಗೆ ಜ್ಯೋತಿಷ್ಯ ಹೇಳುತ್ತೇನೆ, ವಶೀಕರಣ ತಂತ್ರ ಮಾಡುತ್ತೇನೆ ಎಂದು ಕಮಲಾಕರ್ ಭಟ್ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಕೆಲವೊಮ್ಮೆ ಜೈಲರ್ರ ಬಳಿಗೂ ಹೋಗಿ “ನಿಮ್ಮ ಭವಿಷ್ಯ ನೋಡೋಣ” ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಇದಕ್ಕೆ ಜೈಲರ್ ತೀವ್ರವಾಗಿ ಗದರಿಸಿ ಕಳಿಸಿದ್ದಾರಂತೆ.
ಸಿದ್ಧಾಪುರದಲ್ಲಿ ನಡೆದ ಈ ಕೊಲೆ ಪ್ರಕರಣದಲ್ಲಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಅವರ ಅನೈತಿಕ ಸಂಬಂಧ ವಿಚಾರ ಬಹಿರಂಗವಾಗಿದ್ದು, ಪ್ರೇಮ ಸಂಬಂಧದ ಹಿನ್ನೆಲೆ ಕೊಲೆ ನಡೆದಿರುವ ಆರೋಪದಡಿ ಪ್ರಕರಣ ದಾಖಲಾಗಿತ್ತು.