ಯಲ್ಲಾಪುರ: ಶ್ರೀ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ತಾಲೂಕಿನ ಹುತ್ಕಂಡ ಗ್ರಾಮದ ಕಂಚನಹಳ್ಳಿಯ ಜನಪ್ರಿಯ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಈ ಸಂದರ್ಭದಲ್ಲಿ ಶತ ಲಲಿತಾ ಸಹಸ್ರನಾಮ ಪಾರಾಯಣ, ಲಲಿತಾ ಸಹಸ್ರನಾಮ ಲಕ್ಷ ಕುಂಕುಮಾರ್ಚನೆ, ಶತ ಸುವಾಸಿನಿ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿ-ವಿಧಾನಗಳು ನೆರವೇರಿದವು. ವಿದ್ವಾನ್ ಲಕ್ಷ್ಮೀನಾರಾಯಣ ಭಟ್ ತಾರಿಮಕ್ಕಿ ಅವರ ಪೌರೋಹಿತ್ಯದಲ್ಲಿ ಸಪ್ತಶತಿ ಪಾರಾಯಣ ಜರುಗಿತು.
ಲಲಿತಾ ಸಹಸ್ರನಾಮ ಹಾಗೂ ಅರ್ಚನೆ ಪೂಜೆಗಳನ್ನು ಜನಪ್ರಿಯ ಟ್ರಸ್ಟ್ನ ಮಹೇಶ್ ಭಟ್ ಹಾಗೂ ವಿದ್ವಾನ್ ಶ್ರೀಪಾದ್ ಭಟ್ ಆನೆಗುಂಡಿ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಳಿಕ ಕಾವೇರಿ ಮಳಲಗಾಂವ್ ಅವರಿಂದ ಕಟೀಲು ಮಹಾತ್ಮೆ ಹರಿಕಥೆ ಕಾರ್ಯಕ್ರಮ ಜರುಗಿತು. ಪ್ರಭಾತ್ ಜೋಡಳ್ಳ ಹಾರ್ಮೋನಿಯಂ ಹಾಗೂ ನಾರಾಯಣ ಹಿಟ್ಟಿನಬೈಲ್ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮವನ್ನು ಜನಪ್ರಿಯ ಟ್ರಸ್ಟ್ ವತಿಯಿಂದ ಮಹೇಶ್ ಭಟ್ ಸಂಯೋಜಿಸಿ ನಿರ್ವಹಿಸಿದರು.