Saturday, May 30, 2026
HomeLocal News71ನೇ ಬಾರಿ ರಕ್ತದಾನ; ಸಮಾಜಕ್ಕೆ ಪ್ರೇರಣೆಯಾದ ಡಾ. ದಿನೇಶ್ ಹೆಗಡೆ

71ನೇ ಬಾರಿ ರಕ್ತದಾನ; ಸಮಾಜಕ್ಕೆ ಪ್ರೇರಣೆಯಾದ ಡಾ. ದಿನೇಶ್ ಹೆಗಡೆ

ಶಿರಸಿ: ನಗರದ ಮಕ್ಕಳ ತಜ್ಞರಾದ ಡಾ. ದಿನೇಶ್ ಹೆಗಡೆ ಅವರು 71ನೇ ಬಾರಿ ರಕ್ತದಾನ ಮಾಡಿ, ರಕ್ತದಾನದ ಮಹತ್ವವನ್ನು ಸಮಾಜದ ಗಮನಕ್ಕೆ ತಂದಿದ್ದಾರೆ. ಅವರ ಈ ನಿರಂತರ ಸೇವೆ, ಹೆಚ್ಚಿನ ಜನರನ್ನು ರಕ್ತದಾನಕ್ಕೆ ಪ್ರೇರೇಪಿಸುವಂತಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ರಕ್ತದ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಹೆರಿಗೆ ಹಾಗೂ ತುರ್ತು ಚಿಕಿತ್ಸೆಗಳ ಸಮಯದಲ್ಲಿ ರಕ್ತವು ಅನಿವಾರ್ಯವಾಗುತ್ತದೆ. ಆದರೆ, ಅಗತ್ಯವಿರುವ ವೇಳೆಯಲ್ಲಿ ರಕ್ತ ಲಭ್ಯವಾಗದಿರುವುದು ಹಲವಾರು ಬಾರಿ ಸಂಕಷ್ಟಕ್ಕೆ ಕಾರಣವಾಗುತ್ತದೆ.

ರಕ್ತದಾನವು ಸುಲಭವಾದ ಮತ್ತು ಸುರಕ್ಷಿತ ಪ್ರಕ್ರಿಯೆಯಾಗಿದ್ದು, ಆರೋಗ್ಯವಂತ ವ್ಯಕ್ತಿಯೊಬ್ಬರು ಸಾಮಾನ್ಯವಾಗಿ 3-4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ವೈದ್ಯರು ಸೂಚಿಸುತ್ತಾರೆ. ಒಂದು ಬಾರಿ ರಕ್ತದಾನ ಮಾಡಿದರೆ 3 ಜನರ ಜೀವ ಉಳಿಸುವ ಸಾಧ್ಯತೆ ಇದೆ ಎನ್ನುವುದು ಗಮನಾರ್ಹ.

ಇನ್ನೂ ಕೆಲವರಲ್ಲಿ ರಕ್ತದಾನದ ಬಗ್ಗೆ ಭಯ ಹಾಗೂ ತಪ್ಪು ಕಲ್ಪನೆಗಳು ಕಂಡುಬರುತ್ತಿವೆ. ಆದರೆ, ವೈದ್ಯಕೀಯ ನಿಯಮಾವಳಿಗಳಂತೆ ರಕ್ತದಾನ ಮಾಡಿದರೆ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಬದಲಿಗೆ, ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಗೆ ಇದು ಸಹಾಯಕವಾಗುತ್ತದೆ.

ಯುವಕರು ವಿಶೇಷವಾಗಿ ರಕ್ತದಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಅಗತ್ಯವಿದ್ದು, ತಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನೂ ಈ ಕಾರ್ಯಕ್ಕೆ ಪ್ರೇರೇಪಿಸಬೇಕು. ಸಮಾಜದ ಪ್ರತಿಯೊಬ್ಬ ಆರೋಗ್ಯವಂತ ನಾಗರಿಕರೂ ವರ್ಷಕ್ಕೆ ಕನಿಷ್ಠ ಒಂದು ಬಾರಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಡಾ. ದಿನೇಶ್ ಹೆಗಡೆ ಅವರ 71ನೇ ರಕ್ತದಾನವು ಕೇವಲ ವ್ಯಕ್ತಿಗತ ಸಾಧನೆ ಅಲ್ಲ, ಅದು ಸಮಾಜದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಒಂದು ಪ್ರಮುಖ ಹೆಜ್ಜೆಯಾಗಿದೆ. “ರಕ್ತದಾನ — ಜೀವದಾನ” ಎಂಬ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳುವ ಅಗತ್ಯವಿದೆ.

ಡಾ ರವಿಕಿರಣ ಪಟವರ್ಧನ.
ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ
.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share