ಮುಂಡಗೋಡ: ಸಾರ್ವಜನಿಕ ಸ್ಥಳದಲ್ಲಿ ಓಸಿ ಜೂಜಾಟಕ್ಕೆ ಹಣ ಪಂಥ ಕಟ್ಟಿಸಿಕೊಳ್ಳುತ್ತಿದ್ದ ಆರೋಪದ ಮೇಲೆ ಕಾತೂರಿನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನಿಂದ 700 ರೂ ನಗದು ಹಾಗೂ ಓಸಿ ಅಂಕಿ ಬರೆದ ಚೀಟಿಯನ್ನು ವಶಪಡಿಸಿಕೊಂಡಿದ್ದಾರೆ.
ಕಾತೂರ ಗ್ರಾಮದ ಬೊಮ್ಮನಳ್ಳಿ ರಸ್ತೆಯ ಕ್ರಾಸ್ ಬಳಿ ವ್ಯಕ್ತಿಯೊಬ್ಬ ಸಾರ್ವಜನಿಕರನ್ನು ಕರೆದು, ಓಸಿ ಜೂಜಾಟದ ಅಂಕೆಗಳ ಮೇಲೆ ಹಣ ಕಟ್ಟಿದರೆ ಒಂದು ರೂಪಾಯಿಗೆ 80 ರೂ ನೀಡುವುದಾಗಿ ಹೇಳುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮುಂಡಗೋಡ ಠಾಣೆ ಪಿಎಸ್ಐ ಮಂಜುನಾಥ ಗೌಡರ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ.
ಈ ವೇಳೆ ಕಾತೂರಿನ ಜಿಲಾನಿ ಉಸ್ಮಾನಸಾಬ ಮರಗಡಿ (42) ಎಂಬಾತ ಓಸಿ ಚೀಟಿ ಬರೆಯುತ್ತಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ 700 ರೂ ನಗದು, ಒಂದು ಬಾಲ್ಪೆನ್ ಹಾಗೂ ಓಸಿ ಅಂಕೆ ಸಂಖ್ಯೆ ಬರೆದ ಚೀಟಿಯನ್ನು ವಶಕ್ಕೆ ಪಡೆಯಲಾಗಿದೆ.