Friday, July 24, 2026
Join WhatsApp Group
HomeLocal Newsಮನೆಗೊಂದು ಗ್ರಂಥಾಲಯ; ಸಮಿತಿ ರಚನೆ

ಮನೆಗೊಂದು ಗ್ರಂಥಾಲಯ; ಸಮಿತಿ ರಚನೆ

ಕಾರವಾರ: ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಕಾಂಕ್ಷೆಯ ಕಾರ್ಯಕ್ರಮವಾದ ʻಮನೆಗೊಂದು ಗ್ರಂಥಾಲಯʼ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಜಿಲ್ಲೆಯ ಸಂಚಾಲಕರಾಗಿ ಅಂಕೋಲಾದ ಕೃಷ್ಣ ನಾಯಕ ಹಿಚಕಡ ಅವರನ್ನು ಆಯ್ಕೆ ಮಾಡಲಾಗಿದೆ.

ಜಾಗೃತಿ ಸಮಿತಿಯ ಸದಸ್ಯರನ್ನಾಗಿ ಬಿ.ಎನ್. ವಾಸರೆ ದಾಂಡೇಲಿ, ಸಿಂಧುಚಂದ್ರ ಹೆಗಡೆ ಶಿರಸಿ, ಪಿ.ಆರ್. ನಾಯ್ಕ ಕುಮಟಾ, ಶಂಭು ಹೆಗಡೆ ಭಟ್ಕಳ, ಸಣ್ಣಪ್ಪ ಭಾಗ್ವತ ಯಲ್ಲಾಪುರ, ಭಿಮಾಶಂಕರ ಅಜನಾಳ ಜೋಯಿಡಾ, ಯಮುನಾ ಗಾಂವಕರ್ ಕಾರವಾರ, ಬಸವರಾಜ ಓಶಿಮಠ ಮುಂಡಗೋಡ, ಜಿ.ಡಿ. ಗಂಗಾಧರ ಹಳಿಯಾಳ, ಆರ್.ಜಿ. ನಾಯ್ಕ ಸಿದ್ದಾಪುರ, ಎಚ್.ಎಸ್. ಗುನಗಾ ಹೊನ್ನಾವರ, ಸುಕನ್ಯಾ ದೇಸಾಯಿ ಜೋಯಿಡಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share