ಮುಂಡಗೋಡ: ತಾಲೂಕಿನ ಲಕ್ಕೊಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಸುತ್ತಿದ್ದವರ ಮೇಲೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಮುಂಡಗೋಡ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ ಗೌಡ ನೇತೃತ್ವದಲ್ಲಿ ಜೂನ್ 3ರಂದು ಸಂಜೆ 7.20ರ ಸುಮಾರಿಗೆ ದಾಳಿ ನಡೆಸಲಾಯಿತು.
ಬಂಧಿತ ಆರೋಪಿಗಳನ್ನು ಮುಂಡಗೋಡ ಪಟ್ಟಣ ನಿವಾಸಿಗಳಾದ ಪೈರೂಜ್ಖಾನ್ ಅಮಜದ್ಖಾನ್ ಖಾನಜಾದೆ (22), ಸೂರಜ್ ಈರಪ್ಪ ಕೊರವರ (29), ಶಹಬಾಜ್ ಅಹ್ಮದ್ ಮಹಮ್ಮದ್ ಹನೀಫ್ ಕಲೆಗಾರ (28) ಹಾಗೂ ಅನಿಲ್ ನಾಗಪ್ಪ ಕೊರವರ (28) ಎಂದು ಗುರುತಿಸಲಾಗಿದೆ. ದಾಳಿ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ₹9,310 ನಗದು, 52 ಇಸ್ಪೀಟ್ ಎಲೆಗಳು ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ದಾಳಿ ವೇಳೆ ಮೇಹಬೂಬ್ಸಾಬ್ ಬೆಂಡಿಗೇರಿ ಹಾಗೂ ಅಬ್ದುಲ್ ಬಾಕರ್ ಕಲೆಗಾರ ಎಂಬ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.