ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಭಟ್ರಕೇರಿಯಲ್ಲಿರುವ ಶ್ರೀ ಭಾರದ್ವಾಜಾಶ್ರಮದಲ್ಲಿ ರಾಷ್ಟ್ರಕ್ಷೇಮ ಹಾಗೂ ವಿಶ್ವಶಾಂತಿಯ ಸಂಕಲ್ಪದೊಂದಿಗೆ ಆರ್ಷವಿದ್ಯಾ ಟ್ರಸ್ಟ್ ವತಿಯಿಂದ 360ನೇ ಅನುಷ್ಠಾನ ಮತ್ತು ಅಕ್ಷರ ಕೋಟಿ ರಾಮತಾರಕ ಜಪಯಜ್ಞದ ಮಹಾಸಮರ್ಪಣೆ ಕಾರ್ಯಕ್ರಮವು ಮಾರ್ಚ್ 25ರಿಂದ 27ರವರೆಗೆ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಕ್ಷರ ಕೋಟಿ ರಾಮತಾರಕ ಜಪಯಜ್ಞದ ಮಹಾಸಮರ್ಪಣೆ, ಒಂದು ಲಕ್ಷ ರಾಮತಾರಕ ಮಂತ್ರ ಹವನ, ವೇದ ಪಾರಾಯಣ, ಅಥರ್ವಶೀರ್ಷ ಹವನ, ಚಂಡೀ ಹವನ, ಧನ್ವಂತರಿ ಹವನ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಗಳು ನೆರವೇರಲಿವೆ.
ಆಯುಷ್ಮಾನ್ ಭವ – ವಿಜಯೀ ಭವ ಬಳಗ (ಕರ್ನಾಟಕ) ಹಾಗೂ ಆರ್ಷವಿದ್ಯಾ ಟ್ರಸ್ಟ್ (ರಿ), ಭಾರದ್ವಾಜಾಶ್ರಮದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.