Home Crime ಕೆ.ಎಚ್‌.ಬಿ ಕಾಲೋನಿ ವೈದ್ಯರ ಹ*ತ್ಯೆ ಆರೋಪಿ ಬಂಧನ | ಚಿನ್ನಾಭರಣ, ನಗದು ವಶಕ್ಕೆ

ಕೆ.ಎಚ್‌.ಬಿ ಕಾಲೋನಿ ವೈದ್ಯರ ಹ*ತ್ಯೆ ಆರೋಪಿ ಬಂಧನ | ಚಿನ್ನಾಭರಣ, ನಗದು ವಶಕ್ಕೆ

0
41

ಶಿರಸಿ: ಶಿರಸಿಯಲ್ಲಿ ಆಯುರ್ವೇದ ವೈದ್ಯ ರಮೇಶ್ ಕಲ್ಗುಟ್ಕರ್ ಹತ್ಯೆ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿ ಶಿವಮೊಗ್ಗ ಜಿಲ್ಲೆಯ ಪಡುಬೈಲ್ ಮಳಲೂರು ನಿವಾಸಿ ಮಂಜುನಾಥ ಪಿ.ಎಲ್ (70) ಎಂದು ಗುರುತಿಸಲಾಗಿದೆ.

Ad

ಪೊಲೀಸರು ಆರೋಪಿಯಿಂದ ಸುಮಾರು 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ರೂ ನಗದು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಕಾರ್ಯಾಚರಣೆಯನ್ನು ಎಸ್‌ಪಿ ದೀಪನ್ ಅವರ ನೇತೃತ್ವದಲ್ಲಿ, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ, ಡಿವೈಎಸ್‌ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ್ ವರ್ಮ, ಪಿಐ ರಮೇಶ್ ಹೂಗಾರ್ ಮತ್ತು ಹೊಸ ಮಾರುಕಟ್ಟೆ ಠಾಣೆಯ ಪಿಎಸ್ಐ ಬಸವರಾಜ್ ಕನಶೆಟ್ಟಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿ ನಡೆಸಿದ್ದಾರೆ.

ಪೊಲೀಸರ ತ್ವರಿತ ಮತ್ತು ದಕ್ಷ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.

Ad

NO COMMENTS

LEAVE A REPLY

Please enter your comment!
Please enter your name here

error: Content is protected !!