ಯಲ್ಲಾಪುರ: ಯುಗಾದಿ ಉತ್ಸವ ಸಮಿತಿ, ಯಲ್ಲಾಪುರದ 26ನೇ ವರ್ಷದ ಯುಗಾದಿ ಉತ್ಸವದ ಲೆಕ್ಕಪತ್ರ ಸಭೆಯು ಭಾನುವಾರ ಪಟ್ಟಣದ ವೆಂಕಟರಮಣ ಮಠದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷ ವಿಶಾಲ್ ವಾಳಂಬೆ ಅಧ್ಯಕ್ಷತೆ ವಹಿಸಿ, ಉತ್ಸವದ ಜಮಾ-ಖರ್ಚಿನ ವಿವರವನ್ನು ಸಭೆಗೆ ಮಂಡಿಸಿದರು.
ಈ ವೇಳೆ ಮಾತನಾಡಿದ ಉಪಾಧ್ಯಕ್ಷ ಆರ್.ಎಸ್. ಭಟ್ ಚಂದಗುಳಿ, 26ನೇ ವರ್ಷದ ಯುಗಾದಿ ಉತ್ಸವವು ಹಿಂದಿನ ವರ್ಷಗಳಿಗಿಂತ ಹೆಚ್ಚು ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆದಿದ್ದು, ಇದಕ್ಕೆ ಸಹಕರಿಸಿದ ಎಲ್ಲ ಸಂಘಟಕರು, ದಾನಿಗಳು ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಮತ್ತೋರ್ವ ಉಪಾಧ್ಯಕ್ಷ ಗಜಾನನ ಭಟ್ ಕಳಚೆ ಮಾತನಾಡಿ, ಉತ್ಸವದ ಯಶಸ್ಸಿಗೆ ತನು-ಮನ-ಧನದಿಂದ ಸಹಕರಿಸಿದ ಎಲ್ಲರ ಸಹಾಯ-ಸಹಕಾರವನ್ನು ಸ್ಮರಿಸಿ ಕೃತಜ್ಞತೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಮಹೇಶ ನಾಯ್ಕ, ರಾಮು ಆಚಾರಿ, ಗಣೇಶ ದೇವಾಡಿಗ, ಸತೀಶ್ ನಾಯ್ಕ ಹಾಗೂ ಕಾರ್ಯದರ್ಶಿ ಸಿದ್ದಾರ್ಥ ನಂದೊಳ್ಳಿಮಠ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.