Saturday, May 30, 2026
HomeNationalರಸ್ತೆಗಳಿರುವುದು ಸಂಚಾರಕ್ಕೆ, ನಮಾಜ್‌ ಮಾಡಲು ಅಲ್ಲ!

ರಸ್ತೆಗಳಿರುವುದು ಸಂಚಾರಕ್ಕೆ, ನಮಾಜ್‌ ಮಾಡಲು ಅಲ್ಲ!

ಉತ್ತರಪ್ರದೇಶ: ಉತ್ತರ ಪ್ರದೇಶ ಮುಖ್ಯಮಂತ್ರಿ Yogi Adityanath ಅವರು ಸಾರ್ವಜನಿಕ ರಸ್ತೆಗಳ ಮೇಲೆ ನಮಾಜ್ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆ ನಡೆಸುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ರಸ್ತೆಗಳು ಜನರ ಸಂಚಾರಕ್ಕಾಗಿ ನಿರ್ಮಿಸಲ್ಪಟ್ಟಿವೆ. ಪ್ರಾರ್ಥನೆ ಅಥವಾ ಇತರೆ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದನ್ನು ಒಪ್ಪಲಾಗುವುದಿಲ್ಲ” ಎಂದು ಹೇಳಿದ್ದಾರೆ.

“ಪ್ರಾರ್ಥನೆಗಳನ್ನು ನಿಗದಿತ ಸ್ಥಳಗಳಲ್ಲಿ ಅಥವಾ ಪಾಳಿಗಳಲ್ಲಿ ನಡೆಸಬೇಕು. ಮನೆ ಅಥವಾ ಮಸೀದಿಗಳಲ್ಲಿ ಎಲ್ಲರಿಗೂ ಅವಕಾಶ ಸಾಲದೇ ಇದ್ದರೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಯೋಚಿಸಬೇಕು” ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, “ಈ ದೇಶದ ಕಾನೂನು ಮತ್ತು ವ್ಯವಸ್ಥೆಯನ್ನು ಎಲ್ಲರೂ ಗೌರವಿಸಬೇಕು. ಬೀದಿಗಳಲ್ಲಿ ಅರಾಜಕತೆಗೆ ಅವಕಾಶ ಇಲ್ಲ. ಶಾಂತಿಯುತವಾಗಿ ನಿಯಮ ಪಾಲಿಸಿದರೆ ಒಳ್ಳೆಯದು, ಇಲ್ಲವಾದರೆ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಯೋಗಿ ಆದಿತ್ಯನಾಥ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share