Friday, March 13, 2026
HomeStateಒಳಜಗಳಕ್ಕೆ ಪ್ರವಾಸವೇ ಮದ್ದು!; ವಿದೇಶಕ್ಕೆ ಹಾರಲಿದ್ದಾರಾ ಸಮಾನ ಮನಸ್ಕರು?!

ಒಳಜಗಳಕ್ಕೆ ಪ್ರವಾಸವೇ ಮದ್ದು!; ವಿದೇಶಕ್ಕೆ ಹಾರಲಿದ್ದಾರಾ ಸಮಾನ ಮನಸ್ಕರು?!

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ, ವಿಶೇಷವಾಗಿ ಕಾಂಗ್ರೆಸ್ ಪಕ್ಷದೊಳಗಿನ ಅಧಿಕಾರ ಹಂಚಿಕೆ ಸಂಘರ್ಷ ತೀವ್ರವಾಗಿರುವ ಸಮಯದಲ್ಲೇ ಸಮಾನ ಮನಸ್ಕ ಕಾಂಗ್ರೆಸ್ ಶಾಸಕರು ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಂಗಳವಾರ ರಾತ್ರಿ ಬೆಂಗಳೂರಿನಿಂದ ಆಸ್ಟ್ರೇಲಿಯಾ ಕಡೆ ಪ್ರಯಾಣಿಸಲು ಯೋಜನೆ ರೂಪಿಸಲಾಗಿದೆ.

ಈ ಪ್ರವಾಸಕ್ಕೆ ತೆರಳುವವರಲ್ಲಿ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನಲಾಗಿದೆ. ವೀಸಾ ಸಿಗದ ಕಾರಣ ಕೆಲವರು ಪ್ರವಾಸ ರದ್ದುಪಡಿಸಿದ್ದರೆ, ಹೈಕಮಾಂಡ್ ಅಸಮಾಧಾನಕ್ಕೊಳಗಾಗುವ ಭಯದಿಂದ ಇನ್ನೂ ಕೆಲವರು ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕುಟುಂಬ ಸಹಿತ ಟಿಕೆಟ್ ಬುಕ್ ಮಾಡಿರುವ ಕೆಲ ಶಾಸಕರು ಪ್ರಯಾಣ ರದ್ದುಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಕುಟುಂಬದ ಅಸಮಾಧಾನಕ್ಕೆ ಗುರಿಯಾಗುವ ಸಾಧ್ಯತೆಯಿಂದ ಅವರು ಪ್ರವಾಸ ಮುಂದುವರಿಸಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಮಾರ್ಚ್ 1ರಂದು ವಾಪಸ್ಸಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ, ಕಾಂಗ್ರೆಸ್ ಒಳರಾಜಕೀಯ ಗೊಂದಲಗಳ ನಡುವೆಯೇ ಶಾಸಕರ ವಿದೇಶ ಪ್ರವಾಸ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆ ಎಂದೇ ಪರಿಗಣಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share