Saturday, May 30, 2026
HomeCrimeಮಾವಿನಕಟ್ಟಾದಲ್ಲಿ ಯುವಕ ಆತ್ಮ*ಹತ್ಯೆ

ಮಾವಿನಕಟ್ಟಾದಲ್ಲಿ ಯುವಕ ಆತ್ಮ*ಹತ್ಯೆ

ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾ ಕೆಸಿನಕೊಡ್ಲು ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೃತನನ್ನು ಗುರುಪ್ರಸಾದ ವಾಸು ನಾಯ್ಕ (25) ಎಂದು ಗುರುತಿಸಲಾಗಿದೆ. ಆತ ಗಾರೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಈ ಕುರಿತು ಮೃತನ ಅಣ್ಣ ಮಣಿಕಂಠ ವಾಸು ನಾಯ್ಕ (28) ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಗುರುಪ್ರಸಾದ ಅವರಿಗೆ ಮದ್ಯಪಾನದ ಚಟವಿದ್ದು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಏಪ್ರಿಲ್ 26ರ ರಾತ್ರಿ 11 ಗಂಟೆಯಿಂದ ಏಪ್ರಿಲ್ 27ರ ಬೆಳಿಗ್ಗೆ 8.15ರ ನಡುವಿನ ಅವಧಿಯಲ್ಲಿ ಮನೆಯ ಕಟ್ಟಿಗೆಯ ಮುಂಡಗೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share