ಕಾರವಾರ: ಮೊಬೈಲ್ ಫೋನ್ನಲ್ಲಿ ಯಾವುದೋ ಫೈಲ್ಗಳು ಅಪ್ಡೇಟ್ ಆಗುತ್ತಿರುವುದು ಕಂಡುಬಂದ ಕೆಲವೇ ಸಮಯದಲ್ಲಿ ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್ನಿಂದ ಒಟ್ಟು 2.25 ಲಕ್ಷ ರೂ ಹಣ ವರ್ಗಾವಣೆಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಕಾರವಾರದ ಸೀ-ಬರ್ಡ್ ನೌಕರ ಭೋಜರಾಜ ಹನುಮಂತ ಲಮಾಣಿ (44) ಸೈಬರ್ ವಂಚನೆಗೆ ಒಳಗಾದವರು. ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೋಜರಾಜ ಅವರ ಮೊಬೈಲ್ ಫೋನ್ನ ಡಿಸ್ಪ್ಲೇ ಬಂದ್ ಆಗಿದ್ದು, ಮೊಬೈಲ್ನಲ್ಲಿ ಯಾವುದೋ ಫೈಲ್ಗಳು ಅಪ್ಡೇಟ್ ಆಗುತ್ತಿರುವುದು ಅವರಿಗೆ ಕಂಡುಬಂದಿತ್ತು. ಇದಾದ ಕೆಲ ಸಮಯದ ಬಳಿಕ ಅವರ ಮೊಬೈಲ್ಗೆ ಬ್ಯಾಂಕ್ ವಹಿವಾಟಿನ ಎಸ್ಎಂಎಸ್ಗಳು ಬಂದಿವೆ.
ಎಸ್ಬಿಐ ಉಳಿತಾಯ ಖಾತೆಯಿಂದ ₹40,000, ಎಸ್ಬಿಐ ಕ್ರೆಡಿಟ್ ಕಾರ್ಡ್ನಿಂದ ₹1.65 ಲಕ್ಷ ಹಾಗೂ ಎಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆಯಿಂದ ₹20,000 ಹಣವನ್ನು ಅಪರಿಚಿತರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಒಟ್ಟು ₹2.25 ಲಕ್ಷ ಹಣ ಕಳೆದುಕೊಂಡಿರುವ ಭೋಜರಾಜ ಅವರು, ತಮ್ಮ ಮೊಬೈಲ್ಗೆ ಪ್ರವೇಶ ಪಡೆದು ಹಣ ವರ್ಗಾವಣೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.