ಕಾರವಾರ/ಯಲ್ಲಾಪುರ: ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯಲ್ಲಾಪುರ ವಿಭಾಗದ ಕಿರವತ್ತಿ ವಲಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ ಆತಂಕಕಾರಿ ಮರಗಳನ್ನು ಜುಲೈ 13ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕಿರವತ್ತಿ ವಲಯದ ಕಿರವತ್ತಿ, ಕೋಳಿಕೇರಿ ಹಾಗೂ ಹುಣಶೆಟ್ಟಿಕೊಪ್ಪ ಶಾಖೆಗಳ ವ್ಯಾಪ್ತಿಯ ಮದನೂರ ಗಾಂವಠಾಣಾದಲ್ಲಿ ಶ್ರೀ ಗ್ರಾಮದೇವಿ ದೇವಸ್ಥಾನ, ಅನ್ವರ್ ಕಾಸಿಂ ಶೇಖ್, ಮೀರ ಮಹಮ್ಮದ್ ಗೌಸ್ ಮೀರ ರಜಾಕ್, ವಿನಾಯಕ ತಿನ್ನೇಕರ (ಹುಣಶೆಟ್ಟಿಕೊಪ್ಪ), ಸದಾನಂದ ತಮ್ಮು ಕೇಸರಕರ, ಫಕೀರಪ್ಪ ಕಾಸಾರ, ಅನಂತ ಕಲ್ಯಾಣಕರ ಹಾಗೂ ಪುಂಡಲೀಕ ವಾರೇಗೌಡ ಅವರ ಮನೆಗಳ ಸಮೀಪ ಇರುವ ಗಾಂವಠಾಣಾ ಪ್ರದೇಶಗಳಲ್ಲಿ ಮತ್ತು ಡೊಮಗೇರಿ ಗಸ್ತಿನ ಡೊಮಗೇರಿ ರಸ್ತೆ, ಖಾರವಾಡ ಅಂಗನವಾಡಿ ಕೇಂದ್ರ ಹಾಗೂ ಶಾಲೆ ಸಮೀಪದ ಅಪಾಯಕಾರಿ ಮರಗಳನ್ನು ಹರಾಜು ಮಾಡಲಾಗುತ್ತದೆ.
ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಜುಲೈ 13ರಂದು ಬೆಳಿಗ್ಗೆ 11 ಗಂಟೆಗೆ ಆಯಾ ಶಾಖೆಗಳ ವ್ಯಾಪ್ತಿಯಲ್ಲಿ ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಬಹಿರಂಗ ಹರಾಜು ನಡೆಯಲಿದೆ ಎಂದು ಕಿರವತ್ತಿ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.